ರಣರಂಗ

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…. ಯಾವಾಗ್ಯೂ ಗೆಲುವಿಗೆ ಕಾರಣವಾಗಲಾರವು. ಒಮ್ಮೊಮ್ಮೆ ಇಲ್ಲಿಯವರೆಗೆ ಗೊತ್ತಿರುವ ಸಾಧ್ಯತೆಗಳೆಲ್ಲಾ ವಿಫಲವಾಗಿ ಹೊಸ ಸಾಹಸ ಸೃಷ್ಟಿಗೆ ವೀಳ್ಯಕೊಡುವುದಾಗುತ್ತದೆ. ಚರಿತ್ರೆಯ ಚಕ್ರ ಪುನರಾವರ್ತಿಸುವುದಿಲ್ಲ.

ಈ ರಣರಂಗದಲ್ಲಿ ಒಮ್ಮೆ ಪ್ರಬಲಾಸ್ತ್ರವಾಗಿದ್ದದ್ದು ಇನ್ನೊಮ್ಮೆ ಮೊಂಡ ಪೊರಕೆಯಂತಾದೀತು.

ಒಮ್ಮೆ ಸುಸಜ್ಜಿತವಾಹನವಾದದ್ದು ಇನ್ನೊಮ್ಮೆ ಹಳೆ ಬಂಡಿಯಾದೀತು
ಒಮ್ಮೆ ಮೆರೆದ ಧೀರ ನಾಯಕ ಇನ್ನೊಮ್ಮೆ ಅಯೋಗ್ಯನಾದಾನು,
ಒಮ್ಮೆ ರಕ್ಷಸಿದ ಕವಚ ಇನ್ನೊಮ್ಮೆ ಮೃತ್ಯು ಕವಾಟವಾದೀತು
ಒಮ್ಮೆ ಬಳಸಿದ ತಂತ್ರ ಇನ್ನೊಮ್ಮೆ ಹುಡುಗಾಟವಾದೀತು
ಒಮ್ಮೆ ರಚಿಸಿದ ವ್ಯೂಹ ಇನ್ನೊಮ್ಮೆ ಮರುಳುಗೂಡಾದೀತು,

ಒಮ್ಮೆ ತೋರಿದ ಲಾಘವ ಇನ್ನೊಮ್ಮೆ ಅರುಳು ಮರುಳಾದೀತು,
ಒಮ್ಮೆ ಅಜೇಯವೆನಿಸಿದ ಸೈನ್ಯ ಇನ್ನೊಮ್ಮೆ ದನಜಂಗುಳಿಯಾದೀತು,
ಒಮ್ಮೆ ಮೆರೆದ ದೈರ್ಯ ಶೌರ್ಯ ಇನ್ನೊಮ್ಮೆ ಪುಂಡು ಬಂಡಾಟವಾದಾವು,
ಒಮ್ಮೆ ನಂಬಿದ ನೆರೆ ಬೆಂಬಲ ಇನ್ನೊಮ್ಮೆ ಬರಿ ನೆರಿಕೆಯಾದೀತು
ಒಮ್ಮೆ ಕೂಡಿದ ಒಪ್ಪಂದ ಇನ್ನೊಮ್ಮೆ ಚಕ್ಕಂದವಾದೀತು
ಒಮ್ಮೆ ಹರಿದ ಹುಮ್ಮಸ್ಸು ಇನ್ನೊಮ್ಮೆ ಹುಚ್ಚು ಎನಿಸೀತು
ಒಮ್ಮೆ ನಡೆಸಿದ ತಯ್ಯಾರಿ ಇನ್ನೊಮ್ಮೆ ವಯ್ಯಾರವಾದೀತು
ಒಮ್ಮೆ ದೊರೆತ ಬಿರುದಿನ ಪುಚ್ಚ ಒಣರವುದೆಯಾದೀತು ಇನ್ನೊಮ್ಮೆ
ಒಮ್ಮೆ ದೂರೆತ ಬಹುಮಾನಪದಕ ಖೋಟಾ ಪೈಸಾವಾದೀತು
ಇನ್ನೊಮ್ಮೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೆಂಬೆಳಕಿನ ಹೂಕವಿತೆಗಳ ಕ(ಣ)ವಿ
Next post ಲಿಂಗಮ್ಮನ ವಚನಗಳು – ೭೭

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys